ಶ್ರೀ ಸಾಯಿ ಶಿರಿ ಗ್ರೂಪ್ ಎಂಟರ್ಪ್ರೈಸಸ್, ತುಮಕೂರು ಲಾಂಛನದಲ್ಲಿ ಗಿರೀಶ್-ವೀರೇಶ್ ನಿರ್ಮಿಸುತ್ತಿರುವ ಪುಲಿಕೇಶಿ ಚಿತ್ರಕ್ಕೆ ಪೊಲೀಸ್ ಇಲಾಖೆಯಲ್ಲಿ ಬೇಕಾಗಿರುವ ವ್ಯಕ್ತಿ ಗಜರವಿ ಅಂದೇ ಪೊಲೀಸ್ ಇಲಾಖೆಗೆ ಸೇರಿದ್ದ ಪುಲಿಕೇಶಿಗೆ ಅವನಿರುವ ಜಾಗ ತಿಳಿದು ಅಲ್ಲಿಗೆ ಹೋಗಿ ಅವನೊಂದಿಗೆ ಹೊಡೆದಾಡಿ ಅವನು ತಪ್ಪಿಸಿಕೊಳ್ಳುವಾಗ ಎನ್ಕೌಂಟರ್ ಮಾಡುವ ದೃಶ್ಯ ಕೌರವ ವೆಂಕಟೇಶ್ ನೇತೃತ್ವದಲ್ಲಿ ನಡೆಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಮಾ.ಭಾ, ಛಾಯಾಗ್ರಹಣ - ಬಿ.ಗೌಡ, ಸಂಗೀತ - ರಾಜೇಶ್ ರಾಮನಾಥ್, ಕಲೆ-ಸ್ವಾಮಿ, ಸಂಕಲನ- ಸೌಂದರ್ರಾಜ್, ಸಾಹಸ-ಕೌರವ ವೆಂಕಟೇಶ್, ನೃತ್ಯ-ರಾಜು, ಸಹನಿರ್ದೇಶನ - ರವಿಸಾಗರ್, ನಿರ್ವಹಣೆ - ವೀನಸ್ ನಾಗರಾಜ್, ತಾರಾಗಣದಲ್ಲಿ ಭರತ್ ಸರ್ಜಾ, ರೇಖಾ, ರವಿಶಂಕರ್, ಅವಿನಾಶ್, ರಾಜು ತಾಳಿಕೋಟೆ, ಪದ್ಮಾವಾಸಂತಿ, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ.